Thursday, March 25, 2010

ಈ ಅಜ್ಜ ನೆಟ್ಟ ಆಲದಮರಕ್ಕೆ ಉರುಳು ಹಾಕಿಕೊಳ್ಳಲೇ ಬೇಕು


ಈ ಅಜ್ಜ ನೆಟ್ಟ ಆಲದ ಮರಕ್ಕೆ ಉರುಳು ಹಾಕಿಕೊಳ್ಳಲೇ ಬೇಕು! ಡಿ. ವಿ. ಜಿ ಯವರ ಬದುಕಿನ ದರ್ಶನವನ್ನು ಪಡೆದರೆ ಹೀಗನ್ನಿಸುತ್ತದೆ. ಈ ಹಿರಿಯ ಮಾನವಾತಾವಾದಿ, ರಾಜಕಾರಣಿ, ಚಿಂತಕ, ಪತ್ರಕರ್ತ ಮತ್ತು ಇಷ್ಟಕ್ಕೇ ಮುಗಿಯುವುದಿಲ್ಲ ಡಿ.ವಿ.ಜಿ ಎಂಬ ಅಶ್ವತ್ಥ ವೃಕ್ಷದ ರೆಂಬೆ ಕೊಂಬೆಗಳ ವಿಸ್ತಾರವನ್ನು ಅಳೆಯಲಾಗದು... ಅವರೇ ಅಂದಂತೆ ವಿಸ್ತಾರಧೀಂ ಬಾಳು, ವೈಶಾಲ್ಯದೀಂ ಬಾಳು... ನಿಜವಾಗಿಯೂ ಹಾಗೆ ಬಾಳಿದವರು. ಆ ಕಾರಣಕಾ್ಕಗಿಯೇ ಅವರು ನೆನಪಿನಲ್ಲುಳಿಯುತ್ತಾರೆ ಮತ್ತು ಮರೆತು ಹೋಗುತ್ತಾರೆ!
ಹೌದು, ಮರೆತು ಹೋಗುತ್ತಾರೆ. ಮರೆತು ಬಿಡುತ್ತೇವೆ. ಯಾಕೆಂದರೆ ಇಂದು ಹಣದ ಥೈಲಿಯ ಹಿಂದೆ ಗೊತ್ತು ಗುರಿ ಇಲ್ಲದೇ ಹೊರಟ ಆಧುನಿಕ ಪ್ರಭೃತಿಗಳು ನಾವು. ಯುವಕರಾಗಿದ್ದಾಗಿನಿಂದಲೂ ಸಾಮಾಜಿಕ ಚಿಂತನೆಗಳನ್ನು ನಡೆಸುತ್ತಾ ಬಂದವರು. ಬದುಕಿಗೊಂದು ಮಾರ್ಗವನ್ನು ಬರವಣಿಗೆಯ ಮೂಲಕ ಕಂಡುಕೊಂಡವರು. ಯಾರಿಗೂ ಯಾವ ಕಾರಣಕ್ಕೂ ಅಂಜದೇ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದವರು. ವೇದವನ್ನು, ಶಾಸ್ತ್ರಗಳನ್ನು " ವಿವಿಧ ಭಾಷೆಗಳ ಸಾಹಿತ್ಯವನ್ನು ದಿವ್ಯ ತಾದಾತ್ಮ್ಯದಿಂದ ಓದಿಕೊಂಡವರು. ತಮ್ಮ ಮನಸ್ಸಾಕ್ಷಿಯ ವಿರುದ್ಧವಾಗಿ ಯಾವಾಗಲೂ ನಡೆದುಕೊಂಡವರಲ?. ನಾವೆಹಾಗೇನೂ ಅಲ್ಲವಲ್ಲಾ... ಅದಕ್ಕಾ ಅವರು ಮರೆತು ಹೋಗುತ್ತಾರೆ.
ಅವರ ಪತ್ರಿಕಾವೃತ್ತಿಯ ಹಿಂದಿನ ಉದ್ದೇಶಗಳು ಇಂದಿನ ಯಾವ ಪತ್ರಕರ್ತನಲ್ಲಿಯೂ ಕಾಣುವುದಕ್ಕೆ ಸಾಧ್ಯವಿಲ್ಲ.ಮೈಸೂರು ಟೈಮ್ಸ್ ಪತ್ರಿಕೆಗೆ ಅವರು ಬರೆದ ಲೇಖನವೊಂದರ ಕುರಿತು ಮಾನನಷ್ಟ್ಠ ವೊಕದ್ದಮೆ ದಾಖಲಾಯಿತು. ಆಗ ಅದರ ಸಂಪಾದಕರು ರಾಜಿ ಮಾಡಿಕೊಂಡು ಪ್ರಕರಣವನ್ನು ಮುಗಿಸಿದ್ದರು. ಆದರೆ ಗುಂಡಪ್ಪನವರ ಬಳಿ ಇದನ್ನು ಸಹಿಸಲಾಗಲಿಲ್ಲ. ರಾಜೀನಾಮೆ ಕೊಟ್ಟರು. ಪತ್ರಿಕೋದ್ಯೋಗಿಯ ಪ್ರಥಮ ಕರ್ತವ್ಯ ಸತ್ಯ ಪ್ರತಿಪಾದನೆಯೇ ಆಗಿರಬೇಕು ಎಂಬ ಅವರ ನಿಲುವಿನಂತೆ ಸ್ವತಃ ಪತ್ರಿಕೆಯನ್ನು ಶುರು ಮಾಡಿದರು. ವಿವಿಧ ಹಿತಾಸಕ್ತಿಗಳು ಈ ಪತ್ರಿಕೆಯನ್ನು ಸ್ಥಗಿತಗೊಳಿಸಲು ಒತ್ತಾಯ ಮಾಡುತ್ತಲೇ ಇದ್ದರು. ಡಿ.ವಿ.ಜಿ. ಇದಕ್ಕೆಲ್ಲಾ ಖ್ಯಾರೇ ಅನ್ನಲಿಲ್ಲ.

ಇಷ್ಟರಲ್ಲಾಗಲೇ ಮೈಸೂರಿನ ದಿವಾನರಾಗಿದ್ದ ವಿಶ್ವೇಶ್ವರಯ್ಯ ತದನಂತರ ಮಿರ್ಜಾ ಇಸ್ಮಾಯಿಲ್ ಮುಂತಾದವರು ಇವರನ್ನು ಸಲಹೆಯನ್ನು ಕೇಳುವುದಕ್ಕಾಗಿ ಆಗಾಗ ಬರುತ್ತದ್ದರು. ರಾಜಕೀಯದ ಬಗ್ಗೆ,ಸಾರ್ವಜನಿಕ ಜೀವನದ ಬಗ್ಗೆ ಇವರ ವಿಚಾರಧಾರೆಗಳು ಉತ್ತಮವಾಗಿದ್ದವು. ಇವತ್ತಿನ ಹಾಳು ಆಡುಂಬೋಲವನ್ನು ಕಂಡಾಗಲೆಲ್ಲಾ ಡಿವಿಜಿ ನೆನಪಾಗುತ್ತಾರೆ. ಜನರ ಹಿತ ಕಾಯುವ ದೃಷ್ಟಿಯಿಂದ ಅವರು ಹಾಕಿ ಕೊಡಲೆತ್ನಿಸಿದ ರೀತಿ ರೀವಾಜುಗಳೆಲ್ಲಾ ಅನುಷ್ಠಾನಕ್ಕೆ ಬಂದಿದ್ದರೆ ಇವತ್ತಿನ ಸಾಮಾಜಿಕ ಸ್ಥಿತಿ ಹೀಗಿರುತ್ತಿರಲಿಲ್ಲ. ಮಂಕುತಿಮ್ಮನ ಕಗ್ಗವೆಂಬ ಕನ್ನಡದ ಭಗವದ್ಗೀತೆ ಅವರ ಆಚಾರ, ವಿಚಾರಗಳ ಶುದಖತೆ, ಪಾ್ರಮಾಣಿಕತೆಗಳಿಂದಲೇ ಹುಟ್ಟಿದು?. ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಹುಟ್ಟು ಕಾಕಿದರು. ವೊನ್ನೆ 17 ಕ್ಕೆ ನಡೆದ ಅವರ 123 ನೇ ಹುಟ್ಟು ಹ್ಡ್ಬದ ಸಂದರ್ಭದಲ್ಲಿ ಅವರನ್ನು ಹತ್ತಿರದಿಂದ ಕಂಡವರೊಬ್ಬರು ಹೇಳುತ್ತಿದ್ದರು, ಚುನಾವಣೆಗಳು ಘೋಷಣೆಯಾದಾಗ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯೂ ಗೋಖಲೆ ಸಂಸ್ಥೆಗೆ ಬಂದು ತಾವು ಮಾಡಿದ ಸಾಧನೆಗಳ ಬಗ್ಗೆ, ತಮ್ಮ ವಿಚಾರಗಳ ಬಗ್ಗೆ ಸಾರ್ವಜನಿಕ ಭಾಷಣವನ್ನು ಮಾಡಬೇಕಿತ್ತಂತೆ. ಅಲ್ಲಿ ಆಡಿದ ಮಾತುಗಳನ್ನು ಆರಿಸಿ ಬಂದ ನಂತರ ಪದೇ ಪದೇ ನೆನಪಿಸುವ ಕಾರ್ಯವನ್ನು ಇವರು ಮಾಡುತ್ತಿದ್ದರಂತೆ. ಇಷ್ಟೆ ಅಲ್ಲ.ಇವರ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವಾ್ಯವ ಅಭಿವೃದಿಖ ಕಾರ್ಯಗಳಾಗಬೆಕು ಎಂಬುದನ್ನು ಸ್ವತಃ ಸರ್ವೆ ನಡೆಸಿ ಪಾಲಿಕೆಗೆ ಅಂಕಿ ಅಂಶ, ಪಾಲಿಕೆಯ ನೀತಿ ನಿಯಮಾವಳಿಗಳ ಉಲ್ಲೇಖದ ಸಮೇತ ಪತ್ರ ಬರೆದು ತಿಳಿಸುತ್ತಿದ್ದರಂತೆ!
ಹೇಳುತ್ತಾ ಹೋದರೆ ಈ ಪುಣ್ಯಾತ್ಮನ ಬಗ್ಗೆ ಹೇಳಲು ಸಾವಿರ ಸಂಗತಿಗಳಿವೆ. ಪ್ರತಿಯೊಂದು ಕ್ಷಣದಲ್ಲೂ ಮಾದರಿಯಾಗಿ ಇವರು ಕಾಣುತ್ತಾರೆ. ಹತ್ತರ ಜೊತೆ ಹನ್ನೊಂದನೆಯವನಾಗುವುದಕ್ಕಿಂತ ಬದುಕಿನ ಸಾರ್ಥಕತೆಗೆ ಬೇರೆಯದೇ ದಾರಿಯನ್ನು ಹುಡುಕುತ್ತಿದ್ದರೆ ಈ ಅಜ್ಜ ನೆಟ್ಟ ಆಲದ ಮರಕ್ಕೆ ಖಂಡಿತವಾಗಿ ಉರುಳು ಹಾಕಿಕೊಳ್ಳಬೇಕು. ಅವರ ವಿಚಾರಗಳನ್ನು ಓದಬೇಕು... ನಮಿಸಬೇಕು ಆ ವಿಚಿತ್ರಕೆ......
-ನಾಗರಾಜ ವೈದ್ಯ

Monday, March 22, 2010

ಆ ವಿಚಿತ್ರಕೆ ನಮಿಸೋ ಮಂಕುತಿಮ್ಮ...

‘ಈಗಿರುವ ಮತವನ್ನು ಬಿಟ್ಟು ಬೇರೆ ಮತಕ್ಕೆ ನೀವು ಹೋಗುವುದೇ ಆದರೆ 15 ದಿನಗಳ ಮುಂಚೆಯೇ ಸರಕಾರಿ ಕಡತಗಳಲ್ಲಿ ನಮೂದು ಮಾಡಬೇಕು. ಯಾವುದೇ ಕಾರಣಕ್ಕೂ ಗುಟ್ಟಾಗಿ ಈ ಪ್ರಕ್ರಿಯೆಗಳು ನಡೆಯಬಾರದು!’ ಹೀಗೊಂದು ಗೊತ್ತುವಳಿಯನ್ನು ಮಾಡಿ ಈ ಕಾನೂನನ್ನು ಜಾರಿಗೇ ತರುವುದಕ್ಕೆ ಅವರು ಒತ್ತಾಯ ಹೇರುತ್ತಿದ್ದರೆ ಇಡೀ ಮೈಸೂರು ರಾಜ್ಯವಷ್ಟೇ ಅಲ್ಲ, ದೇಶದ ಇತರ ರಾಜ್ಯಗಳ ಆಡಳಿತ ವ್ಯವಸ್ಥೆಯಲ್ಲಿಯೂ ಕೋಲಾಹಲ ಶುರುವಾಯಿತು..
ಆಗಷ್ಟೇ ಡಿ. ವಿ. ಗುಂಡಪ್ಪನವರನ್ನು ಅಧಿಕಾರದಲ್ಲಿದ್ದ ಮಿರ್ಜಾ ಇಸ್ಮಾಯಿಲ್ ಮೈಸೂರು ನ್ಯಾಯವಿಧಾಯಕ ಸಭೆಗೇ ನೇಮಿಸಿ ಮಹತ್ವದ ಜವಾಬ್ಧಾರಿಯನ್ನು ನೀಡಿದ್ದರು. ಸರಕಾರವು ಠರಾಯಿಸುವ ಎಲ್ಲ ಯೋಜನೆಗಳು ಪ್ರಕಟವಾಗುವುದಕೇ್ಕ ಮುನ್ನ ಅದರ ಸಾಧಕ ಭಾದಕಗಳನ್ನು ನೋಡಿ ಅದು ಜನಸಾಮಾನ್ಯರ ಮೇಲೆ ಬೀರುವ ಪ್ರಭಾವವನ್ನು ಅವರು ಹೇಳಬೇಕಾಗಿತ್ತು.
ಆಗಿನ್ನೂ ಸ್ವಾತಂತ್ರ್ಯ ಸಿಕ್ಕಿರದ ಭಾರತದಲ್ಲಿ ಗುಲಾಮಗಿರಿ ನಡೆಯುತ್ತಲೇ ಇತ್ತು. ಮತಾಂತರ,, ಅದಕ್ಕೊಪ್ಪದಿದ್ದರೆ ಗಲಭೆ, ನಿರಾಕರಿಸಿದವರ ಮೇಲೆ ದೌರ್ಜನ್ಯ ಹೀಗೇ ಒಂದರ ಹಿಂದೆ ಒಂದರಂತೆ ಶಾಂತಿ ವಿರೋ—ಕ್ರತ್ಯಗಳು ನಡೆಯುತ್ತಿದ್ದವು. ಇದನ್ನು ನೋಡಿ ಕಂಗಟ್ಟ ಡಿ.ವಿ.ಜಿ ಮತಾಂತರವಾಗಲಿಚ್ಚಿಸುವವರು ಮೊದಲೇ ದಾಖಲಾತಿ ಮಾಡಿಕೊಳ್ಳಬೇಕೇಂದರು. ಎಲ್ಲರೆದುರಿಗೇ ಈ ಪ್ರಕ್ರಿಯೆ ನಡೆದರೆ ಯಾವುದೇ ಸಂದೇಹಗಳಿಗೇ ಆಸ್ಪದವಿರುವುದಿಲ್ಲ. ಆಮಿಷಗಳು, ಬ್ರೇನ್ವಾಶ್ ನಂಥ ಯಾವುದೇ ಕ್ರತ್ಯಗಳಿರಲಿ ಎಲ್ಲವೂ ಬಯಲಿಗೇ ಬರುತ್ತದೆ. ಸಾಮಾಜಿಕವಾಗಿ ಬಹು ಪೆಟ್ಟು ನೀಡುವ, ಗಲಭೆ, ಸಮಾಧಾನಗಳಿಗೇ ಕಾರಣವಾಗುವ ಮತಾಂತರಿಗಳೂ ಸ್ವಲ್ಪಪ್ರಮಾಣದಲ್ಲಿ ಹಿಂದೆ ಸರಿಯುವುದರಿಂದ ವಿವಿಧ ಆಫತ್ತುಗಳು ಕಡಿಮೆಯಾಗುತ್ತದೆ.ಎಂಬ ವೈಚಾರಿಕ ಹಿನ್ನೆಲೆಯಲ್ಲಿ ಅವರು ಈ ಒತ್ತಾಯವನ್ನು ಸರಕಾರಕ್ಕೆ ಮಾಡಿದ್ದರು. ಸರಕಾರ ಈ ವಾದಕ್ಕೆ ಮನ್ನಣೆ ನೀಡಲಿಲ್ಲ ಎಂಬುದು ಮಾತ್ರ ದುಃಖಕರ ಸಂಗತಿ.
ಯಾಕೆ ಈ ಸಂಗತಿ ನೆನಪಾಯಿತೆಂದರೆ ಇಂದಿಗೂ ಮತಾಂತರದ ಭೂತ ನಮ್ಮನ್ನು ಬಿಟ್ಟಿಲ್ಲ. ಕ್ರೈಸ್ತ ಮಿಶನರಿಗಳು ವಿವಿಧ ಆಮಿಷಗಳನ್ನುಒಡ್ಡಿಬಡವರನ್ನು, ಅಮಾಯಕರನ್ನು ಮ್ಕೃಾಂ್ಕೃರಕ್ಕೀಡು ಮಾಡುತ್ತಿದ್ದರೆ, ಇಸಾ್ಲಮಿಗರು ಅನುಸರಿಸುತ್ತಿರುವ ನೀತಿ ಮ್ಕೃ್ತಷ್ಟು ಆ್ಕೃಂಕಕಾರಿಯಾದದ್ದು. ಆವ್ಕೃ್ತೇ ಈ ಮಸೂಧೆಗೇ ಅಂಗೀಕಾರ ದೊರೆತಿದ್ದರೆ ಈ ಸಮಸ್ಯೆ ಇಷ್ಟು ಉಲ್ಬಣಿಸುತ್ತ್ಕೃಿ್ಕೃ್ತೋ ಇಲ್ಲವೋ... ಅದು ಒ್ಕೃ್ತಟ್ಟಿಗಿರಲಿ. ಡಿ.ವಿ.ಗುಂಡಪ್ಪನವರು ಆವತ್ತಿನಿಂದ ಆ ಹುದ್ದೆಯ ಕಡೆಗೇ ಅನಾಸ್ಥೆ ್ಕೃೋರಿದರು . ಕಡೆಗೊಮ್ಮೆ ಬಿಟ್ಟೂ ಬಿಟ್ಟರು.
ಆದರೆ ಸಮಾಜದೆಡೆಗಿನ ್ಕೃುಡ್ಕೃಿ ಅವರನ್ನು ಬಿಡಬೇಕಲಾ್ಲ... ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಶುರು ಮಾಡಿರು. ಸರಕಾರ ಉ್ಕೃ್ತಮವಾಗಬೇಕಾದರೆ ಸಾರ್ವಜನಿಕ ವಿಷಯಗಳ ಅಧ್ಯಯನವಾಗಬೇಕಿದೆ ಎಂಬ ಅಭಿಪಾ್ರಯದಲ್ಲಿ ಶ್ರಮಿಸ್ಕೃೊಡಗಿದರು. ಹಾಗೇ ನೋಡಿದರೆ ಡಿ.ವಿ. ಜಿ. ಇಂದು ಎಲ್ಲರಿಗೇ ಗೊತ್ತಿರುವುದು ‘ಮಂಕು ತಿಮ್ಮನ ಕಗ್ಗ’ ವನ್ನು ಬರೆದಿರುವವರು ಎಂದಷ್ಟೇ. ಆದರೆ ಡಿ. ವಿ. ಜಿ. ಅಷ್ಟೇ ಅಲ್ಲ. ಅವರು ಹಲವು ಕವಲುಗಳಲ್ಲಿ ಹಬ್ಬಿಕೊಂಡವರು. ಪ್ರತಿಯೊಂದು ಕವಲಿನಲ್ಲಿಯೂ ಪರಿಮಳವನ್ನು ಉಳಿಸಿ ಬಂದವರು.
ಬಾಲ್ಯದಲ್ಲಿ ಒಳ್ಳೆಯ ಸಂಸಾ್ಕರ ಸಿಕ್ಕ್ಕೃಿ್ತಲಾ್ಲ... ಬದುಕಿದ್ದಷ್ಟೂ ದಿನ ಬರೆದರು. ್ಕೃಮ್ಮ ವೈಚಾರಿಕ್ಕೃೆಯನ್ನು ಬರಹವಾಗಿ ದಾಖಲಿಸಿಟ್ಟರು. 1915 ರಲ್ಲಿ ಸಾಹ್ಕೃಿ್ಯ ಪರಿಷ್ಕೃ್ತು ಶುರುವಾದಾಗಿನಿಂದ ಬಹಳ ವರ್ಷಗಳ ಕಾಲ ಅಲ್ಲಿಯೇ ಅವರ ದುಡಿಮೆ ಇ್ಕೃ್ಯಾದಿಗಳು. ಅಲ್ಲಿಂದ ಮುಂದುವರೆದವರು ಕಟ್ಟಿದ್ದು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ. ಯಾವುದೇ ಸಮಸ್ಯೆಗಳಿಗೇ ತಿಳುವಳಿಕೇಯೇ ಪರಿಹಾರ ಎಂಬುದನ್ನು ಪ್ರತಿಪಾದಿಸುತ್ತಿದ್ದ ಇವರು ವಸ್ತುಸ್ಥಿತಿಯ ಬಗೇ್ಗ ವೈಜ್ಞಾನಿಕ ನೋಟವನ್ನು ಬೀರಿದರು. ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವಿಚಾರ ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇದರ ಜನಿ್ಮ್ಕೃೋದ್ದೇಶವೇ ರಾಷ್ಟ್ರ ಧರ್ಮವನ್ನು ಹೇಳಿಕೊಡುವುದಾಗ್ಕೃಿ್ತು ಎಂಬುದು ಅವರೇ ನೀಡಿರುವ ವಿವರ‰ೆ.
ಆಗಲೇ ಹೇಳಿದೆನಲಾ್ಲ, ಡಿ. ವಿ. ಜಿ. ಅಂದರೆ ಹಲವು ಕವಲುಗಳಲ್ಲಿ ಹಬ್ಬಿದ ಮಲ್ಲಿಗೇ ಬಳ್ಳಿ ಎಂದು... ಅವರ ಬರವನ್ನು ಓದಬೇಕು ಗೊ್ಕೃ್ತಾಗ್ಕೃು್ತದೆ. ಅರವ್ಕೃ್ತು ವರ್ಷಗಳಿಗಿಂ್ಕೃಲೂ ಹೆಚ್ಚು ಸಮಯ ಇಂಗ್ಲಿ, ಕನ್ನಡ, ಸಂಸ್ಕೃ ಭಾಷೆಗಳಲ್ಲಿ ಬರೆದರು. ಸುಮತಿ ಗ್ರಂಥಮಾಲೆಯನ್ನು ಶುರು ಮಾಡಿದರು. ಶೇ್ಸಪಿಯನ ಮ್ಯಾಬ್ಕೃೆ ನಾಟಕ, ಪರ್ಷಿಯ ಕವಿ ಉಮ ಖಯಾ್ಯಮನ ರುಬಾಯ್ಕೃ್ತುಗಳನ್ನು ಭಾಷಾಂ್ಕೃರ ಮಾಡಿದರು. ಕಾವ್ಯವನ್ನು ಬರೆದರು. ಮಂಕುತಿಮ್ಮನೆಂಬ ಅಜ್ಞ್ಕೃಾ ವೇದಾಂತಿಯನ್ನು ಸೃಷ್ಠಿಸಿ ಅವನ ಮೂಲಕ ಹೇಳಿಸಿದ ಜೀವನ ಸ್ಕೃ್ಯಗಳಂ್ಕೃೂ ಇಂದು ಎಷ್ಟರ ಮಟ್ಟಿಗೇ ಸಾಹಿ್ಕೃ್ಯಾಸಕ್ತರನ್ನು ಹಾಗೂ ಜನಸಾಮಾನ್ಯರನ್ನು ಆವರಿಸಿದೆ ಅಂದರೆ ಅದಕೇ್ಕ ಭಗವದೀ್ಘ್ಕೃೆಯ ಪಟ್ಟವೂ ದೊರ್ಕೃೆುಬಿಟ್ಟಿದೆ. ಸಾಮಾಜಿಕ ಜೀವನವನ್ನು ಬಿಂಬಿಸುವ , ಜೀವನದ ಗತಿಯನ್ನು ಹೇಳಿಕೊಡುವ ಅವರ ಕಾವ್ಯಗಳು ಪ್ರತಿಯೊಬ್ಬನ ಆಂ್ಕೃರಿಕಾನುಭವವಾಗುವ ಪರಿಯನ್ನು ಓದಿಯೇ ಅಸಾ್ವ—ಸಬೇಕು. ಇವರ ಎಂಟು ಸಂಪುಟಗಳಲ್ಲಿ ಪ್ರಕಟವಾದ ಜ್ಞಾಪಕ ಚ್ಕೃಿ್ರಶಾಲೆಯ ಪುಟಗಳು ಚರಿ್ಕೃ್ರೆಯನ್ನು ಹೇಳು್ಕೃ್ತಾ ಹೊಸ ್ಕೃಲೆಮಾರನ್ನು ಸ್ಪರ್ಶಿಸ್ಕೃು್ತವೆ.
ಇವುಗಳ ಜೊ್ಕೃೆಯಲ್ಲಿಯೇ ಹಲವು ಇಂಗ್ಲಿ, ಕನ್ನಡ ಭಾಷೆಗಳಲ್ಲಿ ಪತ್ರಿಕೇಗಳನ್ನು ಪಾ್ರರಂಭಿಸಿದರು. ಇವರ ಸಂಪಾದಕೀಯಗಳಿಗೇ ಇಂದಿಗೂ ಪಾ್ರಶಸ್ತ್ಯವಿದೆ. ಪ್ರಜಾರಾಜ್ಯದ ಬಗೇ್ಗ ಅವರು ನೀಡು ಟಿಪ್ಪಣಿಗಲನ್ನು ನೋಡದರೆ ಇಂದು ಏನಿರಬೇಕಾಗಿ್ಕೃ್ತೋ ಅದಿಲ್ಲ ಎಂಬುದು ಸ್ಪಷ್ಟವಾಗ್ಕೃು್ತದೆ. ನಮ್ಮ ರಾಜ್ಯ ವ್ಯವಸ್ಥೆ ನಮ್ಮ ಸ್ವಭಾವಕ್ಕೂ, ನಮ್ಮ ಸಂದರ್ಭಗಳಿಗೂ ಹೊಂದಿಕೇಯಾಗುವಂತಿರಬೇಕು ಎಂದು ಅವರು ಆವ್ಕೃ್ತೇ ಹೇಳಿದ್ದರು. ಆದರೆ ಆದನ್ನು ಅಳವಡಿಸಿಕೊಳ್ಳುವ ಧೈರ್ಯವನ್ನು ಯಾರು ಯಾಕೇ ಮಾಡು್ಕೃ್ತಾರೆ ಹೇಳಿ... ಜನರನ್ನು ಹರಿದು ಮುಕ್ಕಲು ಇಷ್ಟೆಲಾ್ಲ ಅವಕಾಶಗಳಿದಾ್ದಗ ಅವರ ಮ್ಕೃಾು ಒ್ಕೃ್ತಟ್ಟಿಗಿರಲಿ ಎಂಬ ಅಸಡ್ಡೆ! ಮ್ಕೃ್ತೊಂದು ಮ್ಕೃಾನ್ನು ಅವರು ಹೇಳು್ಕೃ್ತಾರೆ. ರಾಜಕೀಯವು ಮನುಷ್ಯ ಜೀವನದ ಒಂದು ಭಾಗ. ಭಾಗವೇ ಸಮಸ್ತವಲ್ಲ. ಆದ್ದರಿಂದ ರಾಜಕೀಯಕೇ್ಕ ನಾವು ಕೊಡಬಹುದಾದ ಗಮನ ಮ್ಕೃಿವಾದದ್ದು. ಇದರ ವೈರುಧ್ಯವನ್ನು ಇಂದಿನ ಮುಖ್ಯವಾಹಿನಿಯಲ್ಲಿ ಜನಸಾಮಾನ್ಯನೂ ಗುರುತಿಸಬಹುದು. ಎಂಥ ಅದ್ಭ್ಕೃು ಮ್ಕೃಾು ನೋಡಿ, ಅ—ಕಾರದ ಆಶೆಯಿಂದ ಪಕ್ಷಗಳು , ಕಕ್ಷಿಗಳು, ಗುಂಪುಗಳು ಹುಟ್ಟಿಕೊಂಡು ಸಂಚು, ಪ್ಕೃಿೂರಿ ನಡೆಸು್ಕೃ್ತಾರೆ. ಮ್ಕೃ್ಸರ, ವೈಷಮ್ಯ ಇವುಗಳೇ ಹಬ್ಬಿ ನೀತಿ ಮರ್ಯಾದೆಯ ಮಟ್ಟವನ್ನು ಇಳಿಸ್ಕೃು್ತವೆ. ಇಂದಾಗ್ಕೃು್ತರುವುದು ಇದೇ ಅಲ್ಲವಾ? ಚಿಕ್ಕ ಪಂಚಾಯ್ಕೃ, ಪಾಲಿಕೇ, ರಾಜ್ಯ, ವಿಧಾನ ಸಭೆಗಳ ಚುನಾವ‰ೆಗಳ ಸಂದರ್ಭದಲ್ಲಿ ಎಷ್ಟೆಲಾ್ಲ ಪೇ್ರ್ಕೃ್ಕೃಾ್ಮಗಳು ಉದ್ಭವಿಸಿಬಿಡ್ಕೃು್ತವೆ!
ಇಂ್ಕೃಹ ಹಲವು ಸಂಗತಿಗಳನ್ನು ನ್ಕೃಿ್ಯ ನೋಡುವ ಕರ್ಮ ನಮ್ಮದಾಗಿದೆ. ಆಗೇಲಾ್ಲ ಡಿ.ವಿ. ಗುಂಡಪ್ಪನವರು ನೆನಪಾಗು್ಕೃ್ತಾರೆ. ಬದುಕಿರುವವವರೆಗೇ ಈ ಇಂ್ಕೃಹ ಪರಿಸ್ಥಿತಿಗಳಿಂದ ಜನರನ್ನು ಹೊರಕೊ್ಕಯ್ದು ನೆಮ್ಮದಿಯ ಬದುಕನ್ನು ನೀಡುವ ಕನಸು ಹೊಸೆಯುತ್ತಿದ್ದ ಅವರು ನಾವೆಲ್ಲ ಮರ್ಕೃೆ ಆದರ್ಶದಂ್ಕೃೆ ಕಾಣು್ಕೃ್ತಾರೆ. ಹುಡುಕಿದರೆ ಎಲ್ಲೀ ಬೆರಳೆ‰ೆಕೇಯಷ್ಟು ಜನರಲ್ಲಿ ಮ್ಕೃಾ್ರ ಇವರನ್ನು ನೆನಪಿಸಿಕೊಳ್ಳುವ ಸೌಜನ್ಯವಿದೆ. ಹುಲಾ್ಲಗು ಬೆಟ್ಟದಡಿ ಎನು್ನ್ಕೃ್ತಾ ಬಂದವರು ಎಷ್ಟೀ ಮನೆ... ಮನಸುಗಳಲ್ಲಿ ಮಲ್ಲಿಗೇಯಾಗಿ ಉಳಿದಿದಾ್ದರೆ. ಸದ್ಯಕ್ಕಿದು ನಮ್ಮ ಪುಣ್ಯ !
-ನಾಗರಾಜ ವೈದ್ಯ. ಜಿ್ಞಃಜಞಜ್ಝಿ.್ಚಟಞ

Sunday, March 21, 2010

‘ಶುಂಠಿ ’ ಬೆಳೆದವರಿಗೂ ಅಜೀರ್ಣವಾಗದು !





ಶುಂಠಿಯನ್ನು ಬೆಳೆದು ಬದುಕನ್ನು ಹಸನಾಗಿಸಿಕೊಳ್ಳಬಹುದೆಂಬುದೇ ಎಷ್ಟೋ ರೈತರಿಗೆ ಗೊತ್ತಿಲ್ಲ.ತಮ್ಮ ಅಲ್ಪ ಜಾಗದಲ್ಲಿಯೇ ಶ್ರದ್ಧೆ ಹಾಗೂ ಬುದ್ದಿವಂತಿಕೆಯಿಂದ ಶುಂಠಿಯನ್ನು ಬೆಳೆದರೆ ಬೆಳೆಗಾರನಿಗೂ ಅಜೀರ್ಣವಾಗುವುದಿಲ್ಲ!
ಹೌದು.ವಿಶ್ವದ ಪ್ರತಿಶತ 50ಭಾಗ ಶುಂಠಿಯನ್ನು ಭಾರತವೊಂದರಲ್ಲಿಯೇ ಬೆಳೆಯಲಾಗುತ್ತದೆ.ಅದರಲ್ಲೂ ಕೇಳದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತಾದರೂ ಈವರ್ಷದ ಅನಾವೃಷ್ಠಿ ಅಲ್ಲಿಯ ಶುಂಠಿಯ ಇಳುವರಿಯನ್ನು ತಗ್ಗಿಸಿದೆ. ಹಾಗಾಗಿ ಇಂದು ವಿಶ್ವ ಮಾರುಕಟ್ಟೆಯಲ್ಲಿ ಇರುವ ಬೇಡಿಕೆಯಷ್ಟು ಶುಂಠಿಯನ್ನು ಉತ್ಪಾದಿಸಬೇಕಾಗಿದೆ.ತನ್ನಿಮಿತ್ತ ಬೆಳೆದವರಿಗೆ ಉತ್ತಮ ಬೆಲೆಯೂ ಸಿಗಲಿದೆ.ಅಮೇರಿಕಾ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್, ಸೌದಿ ಅರೆಬಿಯಾ, ಕೆನಡಾ ಮೊದಲಾದ ದೇಶಗಳಿಗೆ ಇಲ್ಲಿಂದಲೇ ಶುಂಠಿ ಇಲ್ಲಿಯ ರೈತರ ಕನಸು ಕೊನರಲಿದೆ.
ಅಧಿಕ ಇಳುವರಿಯನ್ನು ಪಡೆಯುವುದರ ಜೊತೆಯಲ್ಲಿ ರೋಗ ನಿರೋಧಕ ಮತ್ತು ಹೊರ ದೇಶದ ತಳಿಗಳನ್ನು ತಂದು ಇಲ್ಲಿ ಅಭಿವೃದಿಖಪಡಿಸುವ ಕಾರ್ಯದಲ್ಲಿ ಕೃಷಿ ವಿಜ್ಞಾನಿಗಳು ಕಾರ್ಯಪ್ರವೃತ್ತವಾಗಿದ್ದಾರೆ.ಇಲ್ಲಿಯ ರೈತರ ಹೊಲದಲ್ಲಿ ವಿವಿಧ ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆದು ಗೆಲುವಿನ ನಗುವನ್ನೂ ಬೀರಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶನದಂತೆ ದಾಸನಕೊಪ್ಪದ ರೈತರೊಬ್ಬರ ಹೊಲದಲ್ಲಿ ಬೆಳೆದ ಶುಂಠಿ ನಿರೀಕ್ಷೆಗಿಂತ ಜಾಸ್ತಿ ಇಳುವರಿಯನ್ನು ನೀಡುವ ಮೂಲಕ ಇತರ ರೈತರ ಗಮನವೂ ಶುಂಠಿಯ ಕಡೆಗೆ ಹೊರಳುವಂತೆ ಮಾಡಿದೆ.
ಎಲ್ಲೆಲ್ಲಿ...ಹೇಗೆ... :
ಮಲೆನಾಡಿನ ಪ್ರದೇಶವು ಶುಂಠಿಬೆಳೆಯಲು ಹೇಳಿ ಮಾಡಿಸಿದ ಜಾಗವೆನ್ನುತ್ತಾರೆ ಕೃಷಿ ತಜ್ಞರು. ಉತ್ತಮ ಬಸಿಗಾಲುವೆ ಇರುವ ಮರಳು ಮಿಶ್ರಿತ ಕೆಂಪುಗೋಡು, ಜೇಡಿ ಮಿಶ್ರಿತ ಗೋಡು, ಕಪ್ಪು ಗೋಡು, ಮಣ್ಣಿಗಿಂತ ಹುಡಿ ಹುಡಿಯಾಗಿರುವ ಅಧಿಕ ಸಾವಯವ ಅಂಶ ಹೊಂದಿರುವ ಗೋಡು ಮಣ್ಣು ಉತ್ತಮ.ಬೆಚ್ಚಗಿನ ಆರ್ಧ್ರ ಹವಾಗುಣದಲ್ಲಿ ಳುವರಿ ಅಧಿಕ .
ಪೆಬ್ರವರಿ ತಿಂಗಳ ಮಧ್ಯ ಭಾಗದಿಂದ ಮಾರ್ಚ್ ತಿಂಗಳ ಮಧ್ಯ ಭಾಗದ ವರೆಗೆ ಬಿತ್ತನೆ ಮಾಡುವ ಮೂಲಕ ಅಧಿಕ ಇಳುವರಿಯನ್ನು ಪಡೆಯಬಹುದು. ನೈರುತ್ಯ ಮಾರುತವು ಶುರುವಾಗುವುದಕ್ಕೂ ಮುಂಚೆ ಅಂದರೆ ಎಪ್ರಿಲ್ ಮೇ ತಿಂಗಳಿನಲ್ಲಿ ನಾಟಿ ಮಾಡಿದರೆ ನೀರಾವರಿ ಸೌಲಭ್ಯವಿರುವ ಸ್ಥಳಗಳಲ್ಲಿ ಉತ್ತಮ ಬೆಳೆಯನ್ನು ಪಡೆಯ್ಡಹುದು.
ಶುಂಠಿಯನ್ನು ಬೆಳೆಯುವಾಗ ಪೋಷಕಾಂಶಗಳು ಕೊರತೆಯಾಗದಂತೆ ನೋಡಿಕೊಂಡರೆ ಉತ್ತಮ ಪ್ರತಿಫಲವನ್ನು ಪಡೆಯ್ಡಹುದು.ಅಧಿಕ ಪೋಷಕಾಂಶಗಳ ಬಳಕೆ ಹಾಗೂ ಬೆಳೆ ಹೊದಿಕೆಗಳು ಸಸ್ಯದ ತೃಪ್ತಿದಾಯಕ ಬೆಳವಣಿಗೆಗೆ ಪ್ರಮುಖವಾಗಿದೆ.ಸಾರಜನಕದ ಸಲುವಾಗಿ ಪ್ರತೀ ಲೀಟರ್ ನೀರಿಗೆ 2 ಗ್ರಾಂ ಯೂರಿಯಾವನ್ನು ಬೆರೆಸಿ ಗಿಡಗಳಿಗೆ ಸಿಂಪರಣೆಯನ್ನು ಮಾಡಬೇಕು.ಬೇರುಗಳ ಬೆಳವಣಿಗೆಗಾಗಿ ಶಿಲಾರಂಜಕವನ್ನು ಶಿಪಾರಸ್ಸು ಮಾಡಿದ ಪ್ರಮಾಣಕ್ಕನುಗುಣವಾಗಿ ಕೊಟ್ಟಿಗೆ ಗೊ್ಡ್ಬರದೊಂದಿಗೆ ಮಿಶ್ರಣ ಮಾಡಿ ಬಳಕೆ ಮಾಡಬೇಕು.ಪೊಟ್ಯಾಷಿಯಂ ಕೂಡ ಅಗತ್ಯವಾಗಿದೆ.
ಈ ಎಲ್ಲ ಪೋಷಕಾಂಶಗಳನ್ನು ವಿವಿಧ ಹಂತಗಳಲ್ಲಿ ನೀಡಬೇಕಾಗುವುದು.
ರೋಗ ಭೀತಿಗೆ ಬೀಜೋಪಚಾರದ ಸಮಾಧಾನ..:
ಶುಂಠಿ ಸೂಕ್ಷ್ಮಬೆಳೆ.ಇಲ್ಲಿ ರೋಗಭಾದೆ, ಕೀಟಭಾದೆಗಳು ಹೆಚು?.ಇದಕ್ಕೆ ಪರಿಹಾರವಾಗಿ ವಿಜ್ಞಾನಿಗಳು ಸರಳವಾಗಿ ಬೀಜೋಪಚಾರ ಮಾಡುವ ಕ್ರಮವನ್ನೂ ಹೇಳಿಕೊಟ್ಟಿದಾ್ದರೆ.ಕಾಂಡಕೊರಕ, ಎಲೆಸುರುಳಿ ಕೀಟ, ಬೇರು ಕಾಂಡ ಶಲ್ಕ ಕೀಟ, ನುಸಿ ಪೀಡೆ ಇವಿಷ್ಟು ಬಾಹ್ಯವಾಗಿ ಅಂಟಿಕೊಂಡರೆ, ಮೆದುಕೊಳೆ ರೋಗ, ಎಲೆಚುಕ್ಕೇ ರೋಗ, ಎಲೆ ಚುಕ್ಕೆರೋಗ, ಅಂಗಮಾರಿ ರೋಗ, ದಂಡಾಣು ರೋಗ, ಮುಂತಾದವು ಗಳು ಇಳುವರಿಯನ್ನು ಹಾಳುಗೆಡವುತ್ತದೆ.ಈ ಪ್ರತಿಯೊಂದು ರೋಗಕ್ಕೂ ಬೀಜೋಪಚಾರ ಹಾಗೂ ವಿವಿಧ ಔಷಧ ಸಿಂಪರಣೆಯನ್ನು ಕೈಗೊಳ್ಳಬೇಕು.ಈ ಕುರಿತಾಗಿ ಕೃಷಿ ತಜ್ಞರ ಮಾಹಿತಿಪಡೆಯುವುದೊಳ್ಳೆಯದು.ಬೇವಿನ ಹಿಂಡಿಯನ್ನು ಹಕ್ಟೇರಿಗೆ 8.0 ಕ್ವಿಂ. ಪ್ರಮಾಣದಲ್ಲಿ ನೀಡುವುದರಿಂದ ಗಡ್ಡೆಕೊಳೆ ರೋಗವನ್ನು ದೂರವಿಡ್ಡಹುದು.
ಇಷ್ಟೆಲ್ಲಾ ಹಂತಗಳನ್ನು ದಾಟಿದ ಮೇಲೆ ಫಸಲನ್ನು ಪಡೆಯಲು 8 ತಿಂಗಳು ಕಾಯಬೇಕು.ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಅಥವಾ ತುದಿಯಿಂದ ಒಣಗಳು ಶುರುವಾದಾಗ ಕೊಯ್ಲು ಮಾಡಬೇಕು. ಬಳಸಿದ ತಳಿ, ಬೇಸಾಯದ ಹಕ್ಟೇರಿಗೆ 20 ರಿಂದ 25 ಕ್ವಿಂ ಬೇರುಗಡ್ಡೆಗಳು ಸಿಗುತ್ತದೆ. ಸಾಲ ಮಾಡಿ ಬೆಳೆದವರಿಗೇ ತೀರಿಸುವುದು ಅಷ್ಟೇನೂ ಕಷ್ಟವಾಗಲಾರದು ಎಂದು ಅನುಭವಸ್ಥ ರೈತರ ಅಭಿಪ್ರಾಯಿಸುತ್ತಾರೆ.

--------- ಶಿಫಾರಸ್ಸು ಮಾಡಿದ ತಳಿಗಳು
ಇಲ್ಲಿಯ ಹವಾಗುಣಕ್ಕನುಗುಣವಾಗಿ ವೈನಾ? ಮನಂಥಾಡಿ, ಮಾರ?, ರಿಯೋ ಡಿ ಜೆನಿರೋ, ಚೈನಾ, ಹಿಮಗಿರಿ, ವರದಾ, ರೆಜತ, ಮಹಿಮ, ಹಿಮಾಚಲ ತಳಿಗಳನ್ನು ವಿಜ್ಞಾನಿಗಳು ಶಿಫಾರಸ್ಸು ಮಾಡುತಾ್ತರೆ. ಪಾ್ರದೇಶಿಕ ಹವಾಗುಣ ಹಾಗೂ ಮಣ್ಣಿನ ಸ್ವಭಾವಗಳಿಗನುಗುಣವಾಗಿ ಬೇರೆ ಬೇರೆ ತಳಿಗಳನ್ನು ್ಡಳಸ್ಡಹುದು.
--------
ಮೊದಲಿಗಿಂತ ಮಾನ ಹೆಚ್ಚು!
ಶುಂಠಿಯ ವೌಲ್ಯವರ್ಧನೆ ಮಾಡಿ ಮಾರುಕಟ್ಟೆಯನ್ನು ಮಾಡುವ ಕ್ರಮಗಳು ಈಗ ಜನಪ್ರಿಯವಾಗುತ್ತಿದೆ.ಒಣಗಿಸಿದ ಶುಂಠಿ, ಬ್ಲೀಚ್ ಮಾಡಿದ ಶುಂಠಿ, ಶುಂಠಿಯ ಕ್ಯಾಂಡಿ, ಶುಂಠಿಯ ಪಾನೀಯ, ಶುಂಠಿ ಚಾಟ್,ಒಣ ಶುಂಠಿ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸುಂಠಿ ಕಷಾಯಪುಡಿ ಇವೇ ಮೊದಲಾದ ಸಿದಖ ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತಿದ್ದರೆ ಬೆಳೆದವರ ಜೇಬು ತುಂಬುತ್ತಿದೆ.
-- ನಾಗಾರಾಜ. ವೈದ್ಯ

Saturday, March 20, 2010

ಸಾತ್ವಿಕ ಅಸಹನೆಯಲ್ಲಿ ಪೊಣಿಸಿದ ಕಾವ್ಯಗುಚ್ಛ 'ದ್ರೌಪದಿ ಬಿಚ್ಚಿದ ತುರುಬುಗಳು'

‘ನಾನು ಸಾಹಿತಿಯಲ್ಲ . ಸಾಹಿತ್ಯದವಿದ್ಯಾಥಿ೵ಯೂ ಅಲ್ಲ. ಕಾವ್ಯ ಕುತೂಹಲಿ ಅಷ್ಟೇ, ಒಳ್ಳೆಯ ಕ್ರತಿಗಳನ್ನೋದಿದಾಗಲೆಲ್ಲಾ ಮನಸ್ಸು ಸಂಭ್ರಮಿಸುತ್ತದೆ’ ಎನ್ನುತ್ತಲೇ ತಣ್ಣಗೆ ಕಾವ್ಯ ಕೃಷಿಯನ್ನು ಮಾಡುತ್ತಿರುವ ಮಲೆನಾಡಿನ ಕವಿ ಸುಬ್ರಾಯ ಮತ್ತಿಹಳ್ಳಿಯವರು ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇಷ್ಟು ವರ್ಷಗಳ ಕಾಲ ಕವಿತೆಗಳನ್ನ ಬರೆಯುತ್ತಾ , ಆಕಾಶವಾಣಿಯಲ್ಲಿ, ಯಾವುದಾದರೂ ಸಾಹಿತ್ಯ ಗೋಷ್ಠಿಗಳು ನಡೆದಲ್ಲಿ ಅವುಗಳನ್ನು ಓದುತ್ತಾ ತನ್ನ ಪಾಡಿಗೆ ತಾನಿರುತ್ತದ್ದ ಈ ಕವಿ ಕಳೆದೆರಡು ದಶಕಗಳಲ್ಲಿ ಬರೆದ ಕವಿತೆಗಳ ಪ್ರಾತಿನಿಧಿಕ ನಲವತ್ನಾಲ್ಕು ಕವಿತೆಗಳನ್ನು ಒಟ್ಟುಗೂಡಿಸಿ ‘ ದ್ರೌಪದಿ ಬಿಚ್ಚಿದ ತುರುಬುಗಳು’ ಎಂಬ ಸಂಕಲನವನ್ನು ಹೊರತಂದಿದ್ದಾರೆ. ನಿತ್ಯ ಜೀವನದ ಅನುಭವದ ಸತ್ಯಗಳನ್ನೇ ಕವಿತೆಯಾಗಿಸುವ ಜೊತೆಯಲ್ಲಿ ಜೀವನದ ಕುರಿತಾಗಿ ಹೊಸ ನೋಟವನ್ನು ಮೂಡಿಸುವ ಇವರ ಶೈಲಿ ಅಪರೂಪವಾದದ್ದು . ಭಾಷೆಯ ಬಳಕೆಯಲ್ಲೂ ಮನೆ, ತಾನು ವಾಸಿಸುವ ಪರಿಸರ ಮತ್ತು ತನ್ನವರು ಕಂಡ ಜಾನಪದವನ್ನು ದೂರವಿರಿಸಿದವರಲ್ಲ. ಹಾಗಾಗಿ ತೀರಾ ಆಪ್ತವಾಗಿ ಇವರ ಕವಿತೆಗಳನ್ನು ಆಸ್ವಾಧಿಸಬಹುದಾಗಿದೆ. ಈ ಹಳ್ಳಿಮನೆಯ ರಸಾನುಭವ ಲೋಕದ ಕಣ್ಣಿನ ಜೊತೆ ಸಂವಹನಕ್ಕಿಳಿಯುವ ಪರಿಯನ್ನು ನೋಡಿ,
ದಪ ದಪ ಸುರಿದ ಮಳೆ ಈಗಾ್ಮತ್ರ ನಿಂತಿದ್ದು
ತಟ ಪಟ ಮರದ ಹನಿ ನೆನಪಿನ ಗೂಡ ಕೆಣಕಿದ್ದು
ತಟವಟ ಎಂಬಾ ಮನಸು ಅಂಬಾರಕೆ ದೃಷ್ಟಿ
ನೆಟ್ಟಿದ್ದು ತಾವರೆ ಎಲೆ ನೀರಿನ ಮಣಿಯಾ ಪೋಣಿಸಲೇ ಹಣಕಿದ್ದು
ಎಂಥವರ ಎದುರಲ್ಲಾದರೂ ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ...ಓದೆಲ್ಲಾ ಮುಗಿದಾಮೇಲೆ ಸಾಲೊಂದು ಕಾಡಿದೆ!
ಹೀಗೆ ಅನುಭವವನ್ನು ಕವಿತೆಯಾಗಿಸುವ ಸುಬ್ರಾಯ ಮತ್ತಿಹಳ್ಳಿಯವರ ಕವಿತೆಗಳು ಬರೇ ಇಷ್ಟೇ ಅಲ್ಲ. ಇದರಾಚೆಗೂ ಅವರದ್ದೇ ಆದ ನಿಲುವುಗಳಿವೆ. ‘ಕಣ್ಣಿಗೆ ಕಂಡ ತಥ್ಯಗಳನ್ನಷ್ಟೇ ಹೇಳುವುದು ಕವಿತೆಯಲ್ಲ. ಬದುಕಿನ ಏರು ಇಳಿವು, ನೋವು ತಲ್ಲಣ, ಖಿನ್ನತೆ , ಖುಷಿಯ ಸಂದರ್ಭದಲ್ಲಿ ಮನಸ್ಸು ಕಲಕುತ್ತದೆ.ಅದು ಎಲ್ಲರದ್ದೂ ಕೂಡಾ. ಅಂಥ ಸಂಚಲನದ ಸಂದರ್ಭದಲ್ಲಿ ಭಾವ ತೀವ್ರತೆಗೆ ಭಾಷಾ ಪೋಷಾಕು ತೊಡಿಸಲು ಪ್ರಯತ್ನಿಸಿದ ಗುರುತುಗಳೇ ಕವನಗಳು ಎಂದು ತಿಳಿದಿದ್ದೇನೆ ’
ತೀರಾ ಭಿನ್ನ ನೆಲೆಯಲ್ಲಿ ಬದುಕಿನ ಗ್ರಹಿಕೆಯನ್ನು ಕವಿತೆಯಾಗಿಸುತ್ತಾರೆ ಎಂಬುದೇ ಇವರ ಕವಿತೆಗಳಿಗಿರುವ ವಿಶೇಷತೆ. ನವೋದಯ ಕಾಲದ ಗೇಯತೆ ಇವರ ಕವಿತೆಗಳ ಹತ್ತಿರದ ಸಂಬಂಧಿ. ಆಕಾಶವಾಣಿ ಇವರ ಅನೇಕ ರಚನೆಗಳನ್ನು ಹಾಡಿದೆ.ಸಂಕಲನದಲ್ಲಿರುವ ಒಂದೊಂದು ಕವಿತೆಯನ್ನು ಓದಿದಾಗಲೂ ಅವರ ನಿಲವು ಒಲವುಗಳ ಲೆಕ್ಕಾಚಾರ ಸ್ಪಷ್ಟವಾಗುತ್ತಾ ಹೋಗುತ್ತವೆ. ಪುಸ್ತಕಕ್ಕೆ ಸಹ ಸ್ಪಂದನವನ್ನು ಬರೆದ ವಿಮರ್ಶಕ ಆರ್‌ ಡಿ ಹೆಗಡೆ ಆಲ್ಮನೆಯವರು ‘ ಸುಬ್ರಾಯ ಮತ್ತಿಹಳ್ಳಿಯವರು ಇಂದಿನ ಸತ್ಯವನ್ನು ಅದಕ್ಕೆ ತಕ್ಕಸಂವೇದನೆಯನ್ನು ಕೂಡಿಸಿಕೊಂಡು - ಭಾಷೆಯಲ್ಲಿ ಎಷ್ಟು ಮೈದಾಳಬಲ್ಲದೋ ಅಷ್ಟನ್ನು ಮಾತ್ರ ಸಾತ್ವಿಕ ಅಸಹನೆಯಲ್ಲಿ ಪದ್ಯವಾಗಿಸುವ ಪರಿ ನಿಜವಾಗಿಯೂ ಜನೋಪಯೋಗಿ ಭಾವಾಭಿವ್ಯಕ್ತಿ’’ ಎಂದು ಹೇಳುತ್ತಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ತಾವು ಬರೆದ ಕಾವ್ಯಗಳನ್ನು ವಾಚಿಸುವುದರಲ್ಲಿಯೇ ಸಂತ್ರಪ್ತಿಯನ್ನು ಕಾಣುತ್ತಿದ್ದ ಮತ್ತಿಹಳ್ಳಿಯವರು ಈಗ ಗುಚ್ಛವನ್ನು ಕಟ್ಟಿ ಓದುಗರ ಕೈಗಿರಿಸಿದ್ದಾಋಎ.. ಇದರಿಂದಾಗಿ ಓದುಗರಿಗೆ ಒಂದೇ ಗುಕ್ಕಿನಲ್ಲಿ ಸಿಗದ ಪದ್ಯಗಳ ಸನ್ನಿಧಿ ಓದಿನಲ್ಲಿ ಸಿಗಲಿದೆ. ಸಂಕಲನದಲ್ಲಿ ಗಮನಿಸಬೇಕಾದ ಕವಿತೆಗಳೆಂದರೆ ‘ ಸಹನೌಭುನಕ್ತು’ ಹವ್ಯಕ ಆಡು ಭಾಷೆಯ ಹೊರ ಸೌಂದರ್ಯದಲ್ಲಿ ಸಾಮಾಜಿಕ ಬದಲಾವಣೆಗಳ ಸೂಕ್ಷ್ಮವನ್ನು ತೆಗೆದಿರಿಸುವ ಪ್ರಯತ್ನ ಉತ್ತಮವಾಗಿದೆ.
ಜಾತಿ ಜಾತಿಗೆ ಬಿರುಕಿದ್ರೇನೂ ಒಳ್ಗೆ ಗಾಳ್ಯಾಡ್ತಿತ್ತು
ಕಷ್ಟ ಸುಖಕ್ಕೆ ಆಪಸ್ನಾತೆ ಸಂಬಂಧ್‌ ಹೆಣ್ಕಂಡಿತ್ತು
------
ಹೊಸ ಕಾಲ ನುಗ್ಗೇ ಬಿಡ್ತು ಹಿತ್ಲ ಬಾಗ್ಲಲ್ಲಿ
ತನ್ನಿಂತಾನೇ ಬೇರು ಬಿಡ್ತು ಕತ್ಲ ಮೂಲೇಲಿ
ಮುಂತಾದ ಸಾಲುಗಳ ಮೂಲಕ ಸಾಮಾಜಿಕ ಬದಲಾವಣೆಯ ಸೂಕ್ಷ್ಮಗಳನ್ನು , ಬದಲಾವಣೆಗಳನ್ನು ಹೇಳುತಾ್ತರೆ. ಅಲ್ಲಲ್ಲಿ ಈ ಬದಲಾವಣೆಗಳ ಬಗೆಗಿನ ಅಸಮಾಧಾನವೂ ಹೊರಬೀಳುತ್ತದೆ. ಸಂಕಲನದ ಶೀರ್ಷಿಕೆ ಕವಿತೆ ಯಾದ ದೌ್ರಪದಿ ಬಿಚ್ಚಿದ ತುರುಬುಗಳು ಕೂಡ ಸಾತ್ವಿಕ ಅಸಹನೆಯ ರೂಪಕವೇ ! ಇವತ್ತು ಪ್ರಕೃತಿ ತನ್ನ ಆಕೃತಿಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭವನ್ನು ಕವಿ ದಾ್ವಪರ ಯುಗಕ್ಕೆ ಕೊಂಡೊಯ್ದು ಅಲ್ಲಿ ತುರುಬು ಕಟ್ಟಿ ಮಾಡಿದ ಶಪಥವನ್ನು ನೆನಪಿಸಿಕೊಳ್ಳುತಾ್ತ ಉಳಿದ ಮರಗಳು ದೌ್ರಪದಿ ಬಿಚ್ಚಿದ ತುರುಬುಗಳು ಎಂದು ಹೇಳುತಾ್ತರೆ.ಇದೇ ರೀತಿಯಲ್ಲಿ ಭಕ್ಷಗಾನ, ಸಾವಯವ , ವರ್ತಮಾನ , ವಾಸ್ತವ, ಒಂದೇ ಗುಡಿ-ಒಂದುಗೂಡಿ,ಹಬ್ಬಕೊ್ಕಂದು ಶಬ್ಧವೇದಿ ಇವೇ ವೊದಲಾದ ಕವಿತೆಗಳು ಇದೇ ಸ್ವಭಾವದಿಂದ ಗಮನ ಸೆಳೆಯುತ್ತವೆ. ಆದರೂ ಎಲ್ಲಿಯೂ ಏಕತಾನತೆ ಸೃಷ್ಟಿಯಾಗುವುದಿಲ್ಲವೆಂಬುದು ವಿಶೇಷ.ಅಷಾಡದ ಹನಿಗಳು, ಮಣ್ಣು ಮೆತ್ತಿದ ಹಾಡು, ಮಳೆ ಹನಿಗಳು ಇವೇ ವೊದಲಾದವು ನೆಲದ ಪ್ರೀತಿಯನ್ನು ಹೇಳುತ್ತ ಸೊಬಗನ್ನು ಅನಾವರಣ ಗೊಳಿಸುತ್ತವೆ. ‘ಈ ಸಂಕಲನದ ಎಲ್ಲ ಕವಿತೆಗಳೂ ಒಂದಲ್ಲ ಒಂದು ತುರ್ತಿನಲ್ಲಿರುವುದರಿಂದ ತನ್ನ ಪದ್ಯಗಳ ಮಿತಿಯನ್ನು ಒಪ್ಪಿಕೊಂಡೇ ಇವರು ಬರೆಯುತಾ್ತರೆ. ಸಂಕಲನದಲ್ಲಿರುವ ಈ ಚೆಹರೆಯ ಕವನಗಳು ಹೆಚ್ಚಿನ ಸಂಖ್ಯೆಯ ಓದುಗರಿಗೆ ಸಾರ್ಥಕವೆನ್ನಿಸಿ ಪದ್ಯ ಪ್ರಕಾರದ ಬಗೆಗೆ ಆಕರ್ಷಣೆಯನ್ನು ಒಡ್ಡುತ್ತದೆ.ಓದುಗನ ಪ್ರಜ್ಞೆಯನ್ನು ಬೆಂಬಲಿಸುವ ಈ ಪದ್ಯಗಳನ್ನು ವಿವರವಾಗಿ ಗಮನಿಸಬೇಕೆನ್ನಿಸುತ್ತೆ’ ಎನ್ನುವ ಆಲ್ಮನೆಯವರ ಮಾತುಗಳು ಇಲ್ಲಿ ನಿಜವೆನಿಸುತ್ತದೆ.
- ನಾಗರಾಜ ವೈದ್ಯ

Friday, March 19, 2010

ಮಾಲಿನಿ ಜಯಶಾಲಿ ನೀ..!





ನಾಲ್ಕು ವರ್ಷಗಳ ಹಿಂದೆ...
ದುಡಿಯಬೇಕೆನ್ನುವ ಮನಸ್ಸಿದೆ. ಸರಿಯಾಗಿ ಶ್ರಮಿಸಿದರೆ ಬದುಕು ಕಟ್ಟಿಕೊಳ್ಳುವುದಕ್ಕೆ ಪುಟ್ಟ ಜಮೀನೂ ಇದೆ... ಅಲ್ಲಿ ನೀರಿಲ್ಲ.. ಏನನ್ನೂ ಬೆಳೆಯುವ ಹಾಗಿಲ್ಲ. ಕೈಯಲ್ಲಿ ಹಣವಿಲ್ಲ ... ಏನನ್ನೂ ಮಾಡುವ ಹಾಗಿಲ್ಲ... ಎಲ್ಲ ಸಣ್ಣ ರೈತರಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಅಟಬೈಲ್‌ ನ ಶ್ರೀಮತಿ ಮಾಲಿನಿ ನಾಯಕ್‌ ಕೂಡ ತುಂಬ ನೊಂದಿದ್ದರು. ಎಲ್ಲೆಲ್ಲೀ ಕೂಲಿ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿರುವ ಇವರ ಬಳಿ ಈ 1.5 ಎಕ್ರೆ ಜಮೀನನ್ನು ಉದ್ಧಾರ ಮಾಡುವಷ್ಟು ದೊಡ್ಡ ಥೈಲಿಯೇನೂ ಇರಲಿಲ್ಲ. ಯಾವ ಬ್ಯಾಂಕುಗಳೂ ಸಹ ಇವರದ್ದು ಅತಿಕ್ರಮಣ ಜಮೀನು ಎಂಬ ಕಾರಣಕ್ಕೆ ಸಾಲ ನೀಡಲಿಲ್ಲ. ಮೂರು ಎಳೆ ಮಕ್ಕಳು, ಪತಿ, ಪತ್ನಿ ಇರುವ ಈ ಸಂಸಾರವನ್ನು ತೂಗಿಸಿಕೊಂಡು ಹೋಗುವುದೇನೂ ಸಣ್ಣ ಸಂಗತಿಯಲ್ಲವಲ್ಲಾ...
ಆಮೇಲೇನಾಯ್ತೆಂದರೆ...
ರಾಜ್ಯದಲ್ಲೆಲ್ಲೆಡೆ ಗ್ರಾಮೀಣಾಭಿವ್ರದ್ದಿಯ ಹೊಸ ಶಕೆಯನ್ನೇ ಶುರು ಮಾಡಿದ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ 2006 ನೇ ಇಸ್ವಿಯಲ್ಲಿ ಇವರ ಊರಿಗೂ ಬಂತು. ಸ್ವತಃ ಈ ಸಂಘಟನೆಯಲ್ಲಿ ಸೇರಲು ಮುಂದಾದರು. ಅಕ್ಕ ಪಕ್ಕದ ಮಹಿಳೆಯರನ್ನೆಲ್ಲಾ ಒಟ್ಟು ಸೇರಿಸಿದರು. ಯೋಜನೆಯ ಸೇವಾನಿರತರ ಸಲಹೆಯನ್ನು ಪಡೆದರು. ಇಷ್ಟು ದಿನ ಕೆಲಸವನ್ನು ಮಾಡಲು ತೊಡಕಾಗಿದ್ದ ಆರ್ಥಿಕ ಸಮಸ್ಯೆಯನ್ನು ಸಂಘದಿಂದ ಸಿಕ್ಕ 2000 ರೂಪಾಯಿ ಪ್ರಗತಿ ನಿಧಿಯಿಂದ ಕೊಂಚ ಮಟ್ಟಿಗೆ ನಿವಾರಿಸಿಕೊಂಡರು. ಖುಷಿಯಾಗುವಷ್ಟು ಕೆಲಸಗಳಾದವು. ಮತ್ತೆ ಹತ್ತು ಸಾವಿರ ರೂಪಾಯಿಗಳ ಪ್ರಗತಿನಿಧಿಯನ್ನು ಅಲ್ಲಿಂದಲೇ ಪಡೆದು ಬಾವಿಯನ್ನು ತೋಡಿದರು.

ತರಕಾರಿ, ಬಾಳೆ, ಕಬ್ಬು, ಅಡಿಕೆ ಇತ್ಯಾದಿ.....
ಇಲ್ಲಿಂದ ಶುರುವಾಯಿತು ನೋಡಿ, ಮಾಲಿನಿಯವರ ವಿಜಯ ಯಾತ್ರೆ! ಬಾವಿಯ ನೀರನ್ನು ಬಳಸಿಕೊಂಡು ತಮ್ಮ ಜಮೀನಿನಲ್ಲಿಯೇ ವಿವಿಧ ತರಕಾರಿಗಳನ್ನು ಬೆಳೆದರು. ಇವರು ವಿನಿಯೋಗಿಸಿದ ಶ್ರಮಕ್ಕೆ ಮೋಸವಾಗಲಿಲ್ಲ. ಪಕ್ಕದ ಊರುಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುವುದರಿಂದ ವಾರದ ಕಿರು ಆದಾಯ ಶುರುವಾಯಿತು. ಉಳಿತಾಯದ ಕಡೆಗೆ ಗಮನವಿಟ್ಟಷ್ಟೇ ಅದಾಯವನ್ನು ಹೆಚ್ಚಿಸಿಕೊಳ್ಳುವ ಕಡೆಗೂ ಗಮನ ಹರಿಸಿದರು. ಅಗತ್ಯವಿದ್ದಾಗಲೆಲ್ಲಾ ಲ ದ.ಗ್ರಾ .ಯೋ. ದ ಸೇವಾನಿರತರ ಸಲಹೆಯನ್ನು ಕೇಳಿದರು. 100 ಅಡಿಕೆ ಗಿಡವನ್ನು ನೆಟ್ಟರು. 500 ಬಾಳೆ ಕಂದುಗಳನ್ನು ತಂದು ಹೊಲದಲ್ಲಿ ಊರಿದರು. 0.2 ಎಕರೆಗಳಷ್ಟು ಜಾಗದಲ್ಲಿ ಕಬ್ಬನ್ನೂ ಬೆಳೆದರು. ಉಳಿದ ಜಾಗದಲ್ಲಿ ಭತ್ತವನ್ನು ಬೆಳೆದರು; ಗೆದ್ದರು.ಯಾಕೆಂದರೆ ಇವರು ಬೇಸಿಗೆಯಲ್ಲಿ ಹೊಲವನ್ನು ಖಾಲಿ ಬಿಡುವುದಿಲ್ಲ. ಭತ್ತದ ಕೊಯ್ಲಿನ ನಂತರ ತರಕಾರಿಗಳನ್ನ ಬೆಳೆಯುತ್ತಾರೆ. . ಈ ಎಲ್ಲ ಕಾರಣಗಳಿಂದ... 2009ನೇ ಇಸ್ವಿಯಲ್ಲಿ ದ. ಗ್ರಾ .ಯೋ ಅನಿಷ್ಠಾನಗೊಳಿಸುತ್ತಿರುವ ಸಾವಯವ ಗ್ರಾಮ ಯೋಜನೆಯಲ್ಲಿ ಆಯ್ಕೆಯಾಗಿದ್ದಾರೆ . ಸಾವಯವ ಚಟುವಟಿಕೆಯಲ್ಲಿ ಸುಧಾರಿತ ಕಾಂಪೋಸ್ಟ್, ಜೀವಾಮೃತ ಚಟುವಟಿಕೆಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಮಾಡುತ್ತಿದ್ದಾರೆ. ಜೀವಾಮೃತ ಮಡುವುದೆಂದರೆ ಅವರಿಗೆ ಅಚ್ಚು ಮೆಚ್ಚು. ಸದ್ಯಕ್ಕೆ ಸಾವಯವಪದ್ಧತಿಯಲ್ಲಿ ಅಡಿಕೆ, ಬಾಳೆ, ತರಕಾರಿ, ಭತ್ತ, ದ್ವಿದಳ ಧಾನ್ಯಗಳನ್ನು ನಾಟಿ ಮಾಡಿದ್ದಾರೆ. ಸಾವಯವದಲ್ಲಿ ತರಕಾರಿ ಸಮೃದ್ಧಿ ಬೆಳೆದಿರುವುದನ್ನು ಕಂಡು ಇವರ ಮನಸ್ಸು ಹಿಗ್ಗುತ್ತದೆ.
ಕೈಲಿರುವ ಥೈಲಿ ತುಂಬುತ್ತಿದೆ ನೋಡಿ...
ಸೂಕ್ತ ಮಾರ್ಗದರ್ಶನ ಸಿಕ್ಕಿದ್ದಕ್ಕಾಗಿ ಈ ವರ್ಷ ಬಾಳೆಯಿಂದ 25000ರೂಪಾಯಿ, ಭತ್ತದಿಂದ ರೂ.8ಸಾವಿರ ರೂಪಾಯಿ, ತರಕಾರಿಯಿಂದ ರೂ.5ಸಾವಿರ ರೂಪಾಯಿ, ಹಾಗೂ ಕಬ್ಬಿನಿಂದ ರೂ. 10ಸಾವಿರಗಳ ಆದಾಯವನ್ನು ಪಡೆದಿದಾ್ದರೆ. ಇಂದು...ಸಿಕ್ಕ ನೆರವನ್ನು ಸದುಪಯೋಗ ಪಡಿಸಿಕೊಂಡು ಹೇಗೆ ಬದುಕನ್ನು ಕಟ್ಟಿಕೊಳ್ಳಬಹುದೆಂಬುದಕ್ಕೆ ಇವರೊಂದು ಮಾದರಿಯಾಗಿದ್ದಾರೆ. ಈ ಬೆಳವಣಿಗೆಯ ಕಥೆಯನ್ನು ಬಿಡಿಸಿಡುತ್ತಾ ಹರ್ಷದ ನಗುವನ್ನು ಬೀರುತ್ತಾರೆ.. -ನಾಗರಾಜ. ವೈದ್ಯ.

ಬೇಕಾಗಿದ್ದಾರೆ , ಹರುಕು ಬಾಯಿಗೆ ಹೊಲಿಗೆ ಹಾಕುವವರು!


‘ನೀನಮ್ಮಾ .. ನೀನು ಹೇಗೆ ಮನೇಲಿ ಅಪ್ಪ ಅಮ್ಮಂಗೆ ಫೂಸಿ ಹೊಡೆದು ಬಾಯ್‌ಪ್ರೆಂಡ್‌ಜೊತೆಗೆ ಸುತಾ್ತಡೋಕೆ ಹೋಗ್ತೀಯಾ.. ? ಅತ್ತ ಕಡೆಯಿಂದ ಎಂ.ಜಿ ರಸ್ತೆಯಿಂದ ಮಾತಾಡುತ್ತಿರುವ ಧ್ವನಿ.. ನಾನು ನಮ್ಮಪ್ಪಂಗೆ ಊರಲ್ಲಿರೋ ಯಾರೋ ಸತ್ತಿದ್ದಾರೆ ಅಂತ್ಹೇಳಿ ಅವನ ಜೊತೆ ನಾಲ್ಕು ದಿನ ಸುತ್ತಾಡ್ಕೊಂಡು ಬರ್ತೀನಿ.. ಇತ್ತ ಹರುಕು ಬಾಯಿಯ ರೇಡಿಯೋ ಜಾಕಿ. ಓಕೆ..ಪೈನಮ್ಮಾ .. ತುಂಬಾ ಚೆನ್ನಾಗಿ ಸುಳ್ಳು ಹೇಳ್ತೀಯ.. ನಿನಗೋಸ್ಕರ ಒಂದು ಬ್ಯೂಟಿಫುಲ್‌ ಟ್ರ್ಯಾಕ್..’ ಇದು ಇತ್ತೀಚಿಗೆ ನಗರದ ಎಫ್‌ .ಎಂ ವಾಹಿನಿಯೊಂದರಲ್ಲಿ ಕೇಳಿದ ಸಂಭಾಷಣೆ. ಈ ವಾಹಿನಿಗಳು ಏನನ್ನು ಸಾಧಿಸಲು ಹೊರಟಿವೆ ಎಂಬ ಪ್ರಶ್ನೆ ಸುಮ್ಮನೇ ಮನಸಿನಲ್ಲಿ ಸುಳಿದಾಡಿತು.
ಅಷ್ಟಕ್ಕೂ ಯಾವಾಗಲೂ ಕೈಯಲ್ಲಿ ವೊಬೈಲ್, ಜೇಬಿನಲ್ಲಿ ಅದರ ಹೆಡ್ಪೋನ್‌ ಇಟ್ಟುಕೊಳ್ಳುತ್ತೇನಾದರೂ ಒಂದೇ ಒಂದು ದಿನವೂ ಎಫ್.ಎಂ. ಕೇಳಲು ಮನಸಾಗುವುದಿಲ್ಲ. ಬೆಂಗಳೂರಿನ ಸಂದಣಿಯಲ್ಲಿ ವಾಹನದ ಸದ್ದು ಕೇಳಿ ಕೇಳಿ ಕಿವಿಯ ತಮಟೆ ಹರಿದು ಹೋದೀತು. ಹಾಡನ್ನಾದರೂ ಕೇಳಿ ಮುದಗೊಳ್ಳುವಾ ಎಂದು ಭಾವಿಸಿ ಎಫ್‌.ಎಂ ಗಳಿಗೆ ಕಿವಿಯಿಟ್ಟರೆ ಬಾಣಲೆಯಿಂದ ಬೆಂಕಿಗೆ ಅನ್ನುತ್ತಾರಲ್ಲಾ..ಪಕ್ಕಾ ಅನುಭವವಾಗುತ್ತದೆ. ಕಿವಿ ಹರಿದು ಹೋಗುತ್ತದೆ. ಕೂಡಲೇ ಹೆಡ್‌ಪೋನ್‌ ಕಿತ್ತೆಸೆಯುವಾ ಅನ್ನಿಸುತ್ತದೆ. ಅಲ್ಲಿಯ ಕಿರುಚಾಟ, ಹಲುಬಾಟಗಳು ಆ ಪರಿಯಲ್ಲಿ ರೇಜಿಗೆ ಹುಟ್ಟಿಸುತ್ತವೆ.!
ಬೆಂಗಳೂರಿನಲ್ಲಿಯೇ ಹನ್ನೊಂದು ಎಫ್‌.ಎಂ ಕೇಂದ್ರಗಳಿವೆ. ಇವುಗಳಲ್ಲಿ ಏಳು ಚಾನಲ್‌ಗಳಂತೂ ಇಡೀ ಬೆಂಗಳೂರು ನಗರದಲ್ಲಿ ಗದ್ದಲವೇಳಲು ಏನೇನು ಬೇಕೋ ಪ್ರತಿಯೊಂದನ್ನೂ ಮಾಡುತ್ತಿವೆ. ಈ ಚಾನಲ್‌ಗಳಲ್ಲಿ ಕೆಲಸ ಮಾಡುವ ರೇಡಿಯೋಜಾಕಿಗಳು ಅದ್ಯಾವ ಪಾಪ ಮಾಡಿದ್ದಾರೋ... ಆ ಪಾಪದ ಹೊರೆಯನ್ನೆಲ್ಲಾ ಕೇಳುಗರ ಕಿವಿಯಲ್ಲಿ ಸುರುವುತ್ತೊಇದ್ದಾರೆ ಎಂಬುದು ವ್ಯಂಗ್ಯದ ಮಾತಷ್ಟೇ ಅಲ್ಲ. ಇತ್ತೀಚಿಗೆ ಎಫ್‌.ಎಂ ವಾಹಿನಿಯೊಂದರಲ್ಲಿ ಜಾಹೀರಾತೊಂದು ಬರುತ್ತಿದೆ. ಹರಿ ಕೀರ್ತನೆಯ ಸ್ವರೂಪದಲ್ಲಿ ಸಿದ್ಧಪಡಿಸಿದ ಆ ಜಾಹೀರಾತಿನಲ್ಲಿ ಅರ್ಜುನನ ಬಾಯಿಯಿಂದ ಸಿನಿಮಾ ಹಾಡು ಹೇಳಿಸುತ್ತಾರೆ...ಹೇಳದೇನೇ ತಾಳಲಾರೆನೂ... ಅಂಥ ರೂಪಸೀ..ನನ್ನ ಪ್ರೇಯಸಿ...
ರೇಡಿಯೋ ಜಾಕಿಗಳಿಗೆ ಸ್ವಲ್ಪೇ ಸ್ವಲ್ಪವೂ ಸಾಮಾಜಿಕ ಕಾಳಜಿಯೆಂಬುದಿಲ್ಲವಾ ಅನಿಸುತ್ತದೆ ಎಷ್ಟೋ ಸಲ.. ಒಂದೇ ಉಸಿರಿನಂತೆ ಇಂದು ನಾನೂ ನೀನೂ... ಎಂದು ತುಟಿ ಮುಚ್ಚದಂತೆ ಮಾತಾಡಬಲ್ಲಂತವರಿಗೆಲ್ಲಾ ಇಲ್ಲಿದೆ ವೇದಿಕೆ. ಜೊತೆಯಲ್ಲಿ ಕಿಸೆ ತುಂಬುವಷ್ಟು ದುಡ್ಡು. ಇಂದಿಗೂ ಪ್ರಸಾರ ಭಾರತಿ ನಡೆಸಿಕೊಂಡು ಬರುತ್ತಿರುವ ರೇಡಿಯೋ ಚಾನಲ್‌ ಗಳನ್ನು ನೋಡಿ ಇವರು ಪಾಠ ಕಲಿಯಬೇಕು. ಯಾವುದೇ ಪ್ರಕಾರದ ಕಲೆಯಾಗಿರಲಿ, ಹಾಡಿರಲಿ, ಅಲ್ಲಿ ಕಲಾವಿದರಿಗೆ, ಕವಿಗಳಿಗೆ, ಸಂಗೀತಗಾರರಿಗೆ ಗೌರವ ಸಿಗುತ್ತದೆ.ಆದರೆ ಖಾಸಗೀ ಸ್ವಾಮ್ಯದ ವಾಹಿನಿಗಳಿಗೆ ಹೀಗೆ ಗೌರವಿಸುವ ಸೌಜನ್ಯವೂ ಇಲ್ಲ . ಒಂದು ಬ್ಯೂಟಿಫುಲ್‌ ಟ್ರ್ಯಾಕ್ಅನ್ನು ಕೇಳೋಣ.. ಅಂದರೆ ಮುಗಿಯಿತು. ಯಾರು ಹಡೆದ ಕೂಸಿದು... ಯಾಕೆ ಇದು ಬ್ಯೂಟಿಫುಲ್‌ ಹಾಡು.. ಯಾವ ಮಾಹಿತಿಯನ್ನೂ ನೀಡುವುದಿಲ್ಲ.ಅವರಿಗೆ ಗೊತ್ತಿದ್ದರೆ ತಾನೇ ಬೇರೆಯವರಿಗೆ ಹೇಳುವುದು? ಇನ್ನೊಂದೆರಡು ವಾಹಿನಿಗಳಿವೆ. ಅಲ್ಲಿರುವ ಜಾಕಿಗಳ ಹೆಸರುಗಳನ್ನು ಕೇಳಿದರೆನೇ ಮತ್ತೇರುತ್ತದೆ. ಬಿಂದಾಸ್‌ ಬಾಸ್‌ ಅಂತೆ, ಹೈ ವೋಲ್ಟೇಜ್‌ ಅಂತೆ, ಸಕ್ಕತ್‌ ಸಖಿಯಂತೆ.. ತರಹೇವಾರಿ ಅಡ್ಡ ಹೆಸರುಗಳನ್ನಿಟ್ಟು ಪಡ್ಡೆಗಳನ್ನು ದಾಸರನಾ್ನಗಿಸುವ ಹುನಾ್ನರದಲ್ಲಿ ಈ ವಾಹಿನಿಗಳು ಕೇಳುಗರ ಸ್ವಸ್ಥ ಮನಸುಗಳನ್ನು ಕೆರಳಿಸುತ್ತಿರುವುದಂತೂ ಸುಳ್ಳಲ್ಲ. ಹಾಗೆ ನೋಡಿದರೆ ಇವರೆಲಾ್ಲ ಏನನ್ನು ಸಾಧಿಸಲು ಹೊರಟಿದ್ದಾರೋ ಗೊತ್ತಾಗದು . ಹನ್ನೊಂದು ವಾಹಿನಿಗಳು ಇಲ್ಲಿಯೇ ಬೇರು ಬಿಟ್ಟಿರುವುದರಿಂದ ಸಹಜವಾಗಿ ಸ್ಪರ್ಧೆಯೇನೋ ಇರುತ್ತದೆ. ಆದರೆ ಸ್ಪರ್ಧೆ ಗೆಲ್ಲುವ ಭರಾಟೆಯಲ್ಲಿ ಸಾಮಾಜಿಕ ಜವಾಬ್ಧಾರಿಯನ್ನು ಮರೆತರೆ ಹೇಗೆ?ಅವರು ಉತ್ತರಿಸಲಾರರು ಬಿಡಿ. ಇತರೆಲ್ಲಾ ಮಾಧ್ಯಮಗಳಿಗಿಂತ ರೇಡಿಯೋಕ್ಕೆ ಹೆಚ್ಚಿನ ಮಹತ್ವವಿದೆ. ಬಯಸಿದಲ್ಲಿಗೆ ಕೊಂಡೊಯ್ಯಬಹುದು ಎಂಬ ಕಾರಣಕ್ಕಾಗಿಯೇ ಒಂದಾನೊಂದು ಕಾಲದಲ್ಲಿ ರೇಡಿಯೋ ದೊಡ್ಡ ಕ್ರಾಂತಿಯನ್ನೇ ಮಾಡಿತು. ಅದರ ಮುಂದುವರೆದ ರೂಪವಾದ ಎಫ್‌.ಎಂಗಳು ಮಾತ್ರ ಈ ಜವಾಬ್ಧಾರಿಯನ್ನು ಮರೆತಿವೆ ಎಂಬುದು ಎಲ್ಲ ಕೇಳುಗರಿಗೂ ಗೊತ್ತಿರುವ ಸಂಗತಿಯೇ. ಭಾರತಕ್ಕೆ ಎಫ್‌.ಎಂ ವಾಹಿನಿಗಳು ಬರುವಾಗಿನ ಉದ್ದೇಶ ಒಳ್ಳೆಯದೇ ಇತ್ತು. ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ , ಚೆನ್ನೈಗಳಲ್ಲಿ ವಾಹಿನಗಳು ವೊದಲು ಶುರುವಾಗಿದ್ದವು. ಗೋವಾದಲ್ಲಿ ಪ್ರವಾಸೀ ಉದ್ದೇಶಕ್ಕಾಗಿ ಈ ಸೌಲಭ್ಯವನ್ನು ಬಳಸಲಾಗಿತ್ತು. ಕ್ರಮೇಣ ಇದನ್ನೇ ಅನುಸರಿಸಿ ಹೈದರಾಬಾದ್ ‌ , ಜೈಪುರ, ಲಖನೌ ಹಾಗೂ ಬೆಂಗಳೂರಿನಲ್ಲೂ ವಾಹಿನಿಗಳು ಶುರುವಾದವು. ಸರಕಾರಕ್ಕೆ ಈ ರೀತಿಯ ವಾಹಿನಿಗಳನ್ನು ಸ್ಥಾಪಿಸಲು ಪರವಾನಿಗೆ ನೀಡುವುದರಿಂದ ಬೊಕ್ಕಸಕ್ಕೆ ಭರ್ತಿ ಹಣ ಬರುವುದರಿಂದ ಪರವಾನಿಗೆ ನೀಡುವುದಕ್ಕೆ ಯಾವ ತೊಡಕನ್ನೂ ಮಾಡುತ್ತಿಲ್ಲ. ಇಲ್ಲಿ ವಾಹಿನಿಗಳು ಶುರುವಾದ ಕಾಲಮಾನವನ್ನೇ ಗಮನಿಸಿ... 2006 ನೇ ಇಸವಿಯೊಂದರಲ್ಲಿಯೇ 5 ವಾಹಿನಿಗಳಿಲ್ಲಿ ಜನ್ಮತಾಳಿದವು ಅಗಸ್ಟ್ನಲ್ಲೊಂದು, ಸೆಪ್ಟೆಂಬರ್‌ನಲ್ಲಿ ಒಂದು, ಆಕ್ಟೋಬರ್ ನಲ್ಲಿ ಇನ್ನೊಂದು ನವೆಂಬರ್‌ ನಲ್ಲಿ ಮತ್ತೊಂದು ಹೀಗೆ ಹುಟ್ಟುತ್ತಲೇ ಹೋದವು. ಮುಖ್ಯವಾಗಿ ಯುವ ಜನತೆಯ ಕಣ್ಮಣಿಗಳಾಗಲು ಪ್ರತಿಯೊಬ್ಬರೂ ತಹತಹಿಸಿದರು. ಹೊಸ ಹೊಸ ವೇಷ ತೊಟ್ಟರು.ಕನ್ನಡ ಭಾಷೆಯ ಮೇಲೆ ಅತ್ಯಾಚಾರ ಮಾಡಿದರು. ತಾವು ಮಾತಾಡುತ್ತಿರುವುದೇ ನಿಜವಾದ ಕನ್ನಡ ಎಂದು ನಂಬಿಸುವಲ್ಲಿಯೂ ಗೆದ್ದರು ! ಯಾವೊಬ್ಬ ಕನ್ನಡಪರ ಹೋರಾಟಗಾರನೂ ಈ ಬಗ್ಗೆ ಮಾತಾಡಲಿಲ್ಲ. ಒಂದೆರಡು ಸಲ ಬಾಯ್ತೆರೆದಂತೆ ಮಾಡಿ ತಮಗೆ ಬೇಕಾಗಿದ್ದು ಈ ವಾಹಿನಿಗಳಿಂದ ಸಂದಾಯವಾಗುತ್ತದೆ ಎಂಬ ಭರವಸೆ ಮೂಡಿದ್ದೇ ತಡ ; ಬಾಯ್ಮುಚ್ಚಿ ಕುಳಿತುಕೊಂಡರು.! ಈ ಸತ್ಯ ಎಲ್ಲರಿಗೂ ಗೊತ್ತಿದೆ.

ಇಂತವರ ಹುಚ್ಚಾಟಗಳಿಂದಾಗಿಯೇ ಇಂದು ಈ ಹಾಳು ಹರಟೆಯನ್ನು, ನಮ್ಮ ನೆಲದ, ನಮ್ಮ ಸಂಸ್ಕೃತಿಯ ಅವಹೇಳನವನ್ನು ಕೇಳುವ ಪರಿಸ್ಥಿತಿ ಎದುರಾಗಿದೆ. ಅರ್ಜುನನ ಬಾಯಲ್ಲಿ ಸಿನಿಮಾ ಹಾಡನ್ನು ಹೇಳಿಸುವ ಮಟ್ಟಿಗೆ ಇವರು ನಮ್ಮ ವಾಹಿನಿಗಳ ಪಿತೃಗಳು ಸುಧಾರಿಸಿದಾ್ದರೆ(?!). ಯಾರನ್ನು ಹೇಗೆ ಬೇಕಾದರೂ ಬಿಂಭಿಸಬಲ್ಲ ಈ ಕ್ರಿಯಾಶೀಲತೆಯ ಪರಮಾವಧಿಗಳಿಗೆ ಲಗಾಮು ಹಾಕುವ ಕಾನೂನುಗಳು ಬೇಕಾಗಿವೆ. ಆದಷ್ಟು ಬೇಗ ಈ ಹರುಕು ಬಾಯಿಗಳನ್ನು ಹೊಲಿಯಲು ನಮ್ಮ ವ್ಯವಸ್ಥೆ ಪರಿವರ್ತನೆಯಾಗಬೇಕಿದೆ. ಯಾವಾಗ ಆಗುತ್ತದೆ ಅಂತ ಮಾತ್ರ ಕೇಳಬೇಡಿ, ಯಾಕೆಂದರೆ ಆಳುವವರಿಗೆ ಆ ಅವಶ್ಯಕತೆ ಬಿಡಿ!

- ನಾಗರಾಜ್‌. ವೈದ್ಯ